ವಾರ್ಡ್ ನಂ 18 ರಲ್ಲಿ ಬಹುನಗಳಿಂದ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನ ನಾಂದಿ ಹಾಡಲು ಪುರಸಭೆ ಸದಸ್ಯ ಇಬ್ರಾಹೀಮ್ ಬಾಷ ರವರು ವಾರ್ಡಿನ ಜನತೆಗೆ ಕೊಟ್ಟ ಮಾತಿನಂತೆ ನಡೆಯುತ್ತಾ ಹೊಸ ಪೈಪ್ ಲೈನ್ ಹಾಕುವುದರ ಮೂಲಕ ವಾರ್ಡಿನ ಜನತೆಗೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ವೆಂದು ಹಿರಿಯ ಪುರಸಭೆ ಸದಸ್ಯ ರಾಜಾ ಮಹೀಂದ್ರ ನಾಯಕ್ ಹೇಳಿದರು.
ಅವರು ಇಂದು ಮಾನವಿ ನಗರದ ವಾರ್ಡ್ ನಂ 18 ರಲ್ಲಿ ಪುರಸಭೆಯ 14.ನೇ ಹಣಕಾಸು ಯೊಜನೆಯಡಿಯಲ್ಲಿ ಸುಮಾರು 12 ಲಕ್ಷ ರೂಪಾಯಿಗಳಲ್ಲಿ ಸಿಸಿ ರೊಡ್ ,ಒಂದು ಬೊರ್ವೇಲ್ ಹಾಗೂ ಕುಡಿಯುವ ನೀರಿನ ಹೊಸ ಪೈಪ್ ಲೈನ್ ಕಾಮಗಾರಿಯನ್ನು ಉದ್ಟಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಇಬ್ರಾಹೀಮ್ ಕುರೇಶಿ ಹಾಗು ಪುರಸಭೆ ಸದಸ್ಯರಾದ ತನ್ವೀರುಲ್ ಹಸನ್ , ವಾರ್ಡಿನ ಪುರಸಭೆ ಸದಸ್ಯ ಇಬ್ರಾಹೀಮ್ ಬಾಶ, ಮೌನೇಶ ನಾಯಕ, ಎಸ್ ಎಮ್ ಅನ್ವರ್, ತೇಜ ಹಿರೇಮಟ್ ಮತ್ತು ವಾರ್ಡಿನ ಹಿರಿಯರು ಉಪಸ್ಥಿತರಿದ್ದರು