ಸಿಂಧನೂರು:ಫೆ.27- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 78ನೇ ಹುಟ್ಟು ಹಬ್ಬದ ನಿಮಿತ್ಯ ಬಿಎಸ್ ಯಡಿಯೂರಪ್ಪ ಅಭಿಮಾನಿಗಳ ಸಂಘದ ತಾಲ್ಲೂಕು ಘಟಕದವತಿಯಿಂದ ನಗರದ ಆಶಾಕಿರಣ ಬಡ ಮಕ್ಕಳ ಮತ್ತು ಅನಾಥ ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
ನಂತರ ಅಭಿಮಾನಿಗಳ ಸಂಘದ ತಾಲ್ಲೂಕಾಧ್ಯಕ್ಷ ಸಿದ್ದು ಹೂಗಾರ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಹಲವಾರು ಜನಪರ ಚಳವಳಿಗಳನ್ನು ಮಾಡುವ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮೂರು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವರು ದೀನ ದಲಿತರ, ಬಡವರ ಪರವಾದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ರಾಜಕಾರಣದಲ್ಲಿ ಮಾತಿಗೆ ನಿಲ್ಲುವ ವ್ಯಕ್ತಿ ಎಂದರೆ ಅದು ಯಡಿಯೂರಪ್ಪನವರು ಮಾತ್ರ ಅಂತವರ ಜೀವನ ಪ್ರತಿಯೊಬ್ಬರಿಗೂ ಆದರ್ಶನೀಯ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ ಮೂಡಲಗಿರಿ ಕ್ಯಾಂಪ್, ವೀರೇಶ, ಚೆನ್ನಬಸವ ದೇಸಾಯಿ, ರಾಜು ಅಡವಿಭಾವಿ, ಮೌನೇಶ ಗೊರೇಬಾಳ, ಮೌನೇಶ, ಬಸವರಾಜ, ಮಲ್ಲಿಕಾರ್ಜುನ ಕಟಗಲ್, ಅಕ್ಷಯಗೌಡ, ಆದನಗೌಡ, ಪ್ರವೀಣ್ ಶೆಟ್ಟಿ, ಅಭಿಗೌಡ, ಮುತ್ತು ಪಾಟೀಲ್ ಇದ್ದರು.