ಎಲ್ಲ ಜಾತಿ ಜನಾಂಗದವರು ಸಂವಿಧಾನವನ್ನು ಅನುಸರಿಸೋಣ-ರಾಜಾ ವೆಂಕಟಪ್ಪ ನಾಯಕ್

0
217
ಮಾನ್ವಿ:ಜ.26 ಪ್ರಪಂಚದ ಬಹುದೊಡ್ಡ ಸಂವಿಧಾನವನ್ನು ಡಾಕ್ಟರ್ ಬಿಆರ್  ಅಂಬೇಡ್ಕರ್ ಅವರು ಬರೆದುಕೊಟ್ಟಿರುವ ಸಂವಿಧಾನವನ್ನು ಎಲ್ಲ ಜಾತಿ ಜನಾಂಗದವರು ಅನುಸರಿಸಬೇಕಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 71ನೆe ಗಣರಾಜ್ಯೋತ್ಸವ ದಿನಾಚರಣೆಯ ಸಂಸ್ಕೃತಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಎಲ್ಲ ಜಾತಿ ಜನಾಂಗದವರಿಗೆ ಸಮಾನತೆ ಸಾರಿದ್ದಾರೆ.ಪ್ರತಿಯೊಬ್ಬರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಬಲರಾಗಬೇಕು.
230 ಕೋಟಿ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗಾಗಿ ತಂದಿದ್ದೇನೆ.ಮಾನ್ವಿಯಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ನಾಲ್ಕು ಕೋಟಿ ವೆಚ್ಚದಲ್ಲಿ  ಕ್ರೀಡಾಂಗಣ ನಿರ್ಮಿಸಲು ಅನುದಾನ  ಬಿಡುಗಡೆಗೊಳಿಸಿದ್ದಾನೆ ಎಂದು ಹೇಳಿದರು.
 71ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ತಾಲ್ಲೂಕು ದಂಡಾಧಿಕಾರಿಗಳಾದ ಅಮರೇಶ್ ಬಿರಾದಾರ್ ನೆರವೇರಿಸಿದರು.ಪೊಲೀಸ್ ಇಲಾಖೆ ವಿವಿಧ ಶಾಲೆ ಮಕ್ಕಳಿಂದ ಪೆರೇಡ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್ ತಿಮ್ಮಾರೆಡ್ಡಿ ಭೋಗಾವತಿ, ಶಿವಶಂಕರಗೌಡ ಬಾಗಲವಾಡ, ವೆಂಕಟೇಶ ಗುಡಿಹಾಳ, ವಿಜಯಲಕ್ಷ್ಮಿ ಪುರಸಭೆ ಮುಖ್ಯಾಧಿಕಾರಿ, ದತ್ತಾತ್ರೇಯ ಕಾರ್ನಾಡ್ ಸಿಪಿಐ, ಜಿತೇಂದ್ರ ಅಂಗಡಿ, ಶಿವಪ್ಪ, ಪಿಎಸ್ಐ ರಂಗಪ್ಪ ದೊಡ್ಮನಿ ಹಾಗೂ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here