ಕೇಂದ್ರ ಸರ್ಕಾರದ ಜನ,ಕಾರ್ಮಿಕ, ರಾಷ್ಟ್ರ ವಿರೋಧಿ ನೀತಿ ಖಂಡಿಸಿ ಜ.8ರಂದು ಮುಷ್ಕರ- ಎಚ್.ಶರ್ಪುದ್ದಿನ್ 

0
179
ಮಾನ್ವಿ:ಜ.06 ಕೇಂದ್ರ ಸರಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ, ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಜನವರಿ 8ರಂದು ಮಾನ್ವಿಯಲ್ಲಿ  ಸಾರ್ವತ್ರಿಕ ಮುಷ್ಕರಕ್ಕೆ ಎಲ್ಲರೂ ಬೆಂಬಲಿಸಿ ಎಂದು ‌ಸಿಐಟಿಯು ನ ತಾಲೂಕಾಧ್ಯಕ್ಷರಾದ ಎಚ್. ಶರ್ಫುದ್ದಿನ್ ಪೋತ್ನಾಳ್,ನಾಗಲಿಂಗ ಸ್ವಾಮಿ, ‌ಸಂಗಯ್ಯ ಸ್ವಾಮಿ ಹೇಳಿದರು.
 ‌ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು
ಭಾರತದ ಭವಿಷ್ಯವು ಪ್ರಸಕ್ತ ಕೇಂದ್ರ ‌ಸರಕಾರದ ಅಡಿಯಲ್ಲಿ ಆತಂಕಕಾರಿ ಹಂತವನ್ನು ತಲುಪಿದೆ ತಿವೃವಾಗುತ್ತಿರುವ ಅರ್ಥಿಕ‌ ಹಿಂಜರಿತ,‌ ಕುಸಿಯುತ್ತಿರುವ ಜಿಡಿಪಿ, ಹೆಚ್ಚುತ್ತಿರುವ ನಿರುದ್ಯೋಗ, ಆದಾಯ ಉತ್ಪನ್ನಗಳಲ್ಲಿ ಇಳಿಮುಖ, ಆಳಗೊಳ್ಳುತ್ತಿರವ ಬಡತನ, ಮತಹೀನ ಖಾಸಗೀಕರಣ, ರಾಷ್ಟ್ರೀಯ ಸಂಪತ್ತುಗಳ‌ ವಿದೇಶಿಕರಣ, ದೇಶಿಯ, ಕೈಗಾರಿಕಾ ನಾಶ, ಬಡವ ಶ್ರೀಮಂತರ ನಡುವಿನ ಅಸಮಾನತೆಯ ಹೆಚ್ಚಳ,ಕೃಷಿ ಮತ್ತು ಕೃಷಿಕರ ನಾಶ, ತೀವ್ರವಾದ ಗ್ರಾಮಿಣ ಬಿಕ್ಕಟ್ಟು ‌ಹೀಗೆ ಪ್ರತಿಯೊಂದು ಕ್ಷೇತ್ರವು ಅತ್ಯಂತ ‌ಗಂಭೀರ ಪರಿಸ್ಥಿಗೆ ನೂಕಲ್ಪಟ್ಟಿದೆ ಕೇಂದ್ರ ಸರಕಾರ ಇವೆಲ್ಲವನ್ನೂ ಮುಚ್ಚಿ ಹಾಕಲು ಅಂಕಿ ಸಂಖ್ಯೆಗಳನ್ನೆ ತಿರುಚಿ ಹಾಕುತ್ತಿರತ್ತಿರುವ ಹಾಗೂ ಪೌರತ್ವ ಕಾಯ್ದೆ ಜಾರಿ ಮಾಡಲು ಹೊರಟಿರುವ  ಕೇಂದ್ರ ‌ಸರಕಾ ಕೇಂದ್ರ ‌ಸರಕಾದ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಕ್ರೀಯಾ ಸಮಿತಿ ‌ವತಿಯಿಂದ ಬಸವ ವೃತ್ತದಲ್ಲಿ ‌ಜನವರಿ  8ರಂದು ಪ್ರತಿಭಟನೆ ನಡೆಯಿಲಿದ್ದು ಈ ಈ ಪ್ರತಿಭಟನೆಗೆ ವ್ಯಾಪಾರ ‌ವಹಿವಾಟುದಾರರು,ತಮ್ಮ ಅಂಗಡಿಗಳನ್ನು ಮುಚ್ಚಿ ಸಹಕಾರಸಬೇಕು ಮತ್ತು  ಜನಸಾಮಾನ್ಯರೆಲ್ಲರೂ ಈ ಪ್ರತಿಭಟನೆಯಲ್ಲಿ ‌ಭಾಗವಹಿಸಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ‌ನಿತ್ಯಾನಂದ‌ ಕೋನಾಪುರ ಪೇಟೆ, ಚನ್ನಮ್ಮ, ‌ರುದ್ರಪ್ಪ ನಾಯಕ, ಪ್ರದೀಪ್, ಬಸ್ಸಮ್ಮ, ಬಸ್ಸಯ್ಯ ಸ್ವಾಮಿ, ಹುಸೇನ್ ಬಾಷ್, ಶಾಂತ ಸಾಗರ, ದುರೇಂದ್ರ, ದ್ರಾಕ್ಷಯಣಿ, ಸಿದ್ದಲಿಂಗಯ್ಯ, ಚನ್ನಬಸವ, ಚನ್ನಪ್ಪ, ಬಸವರಾಜ ಮೇಸ್ತ್ರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here