ಜೆಡಿಎಸ್ ಅಭ್ಯರ್ಥಿಯ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೇಸ್ ಅಭ್ಯರ್ಥಿ ಟಿ ಮಹಾದೇವಪ್ಪ ನಾಯಕ

0
246

ಮಾನ್ವಿ:ಡಿ.31 ಬಲ್ಲಟಿಗಿ ಎಪಿಎಂಸಿ ಕ್ಷೇತ್ರದಿಂದ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಟೀ ಮಹಾದೇವಪ್ಪ ನಾಯಕ ಅವರು 251 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಯ್ಯಣ್ಣ ನಾಯಕ ಸಾವಿನಿಂದ ತೆರವಾಗಿದ್ದ ಎಪಿಎಂಸಿ ಬಲ್ಲಟಿಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ ಮಹಾದೇವಪ್ಪ ನಾಯಕ 1223 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನಾಗರಾಜ ನಾಯಕ ಮ್ಯಾಕಲ್ ಅವರು 972 ಮತಗಳನ್ನು ಪಡೆದು ಸೋಲು ಒಪ್ಪಿಕೊಂಡಿದ್ದಾರೆ.

ಗೆಲುವಿನ ನಂತರ ಕಾಂಗ್ರೆಸ್ ಅಭ್ಯರ್ಥಿ ಟಿ ಮಹಾದೇವಪ್ಪ ನಾಯಕ್ ಅವರು ಮಾತನಾಡಿ ಎಪಿಎಂಸಿ ಬಲ್ಲಟಿಗಿ ಕ್ಷೇತ್ರಕ್ಕೆ ಒಳಪಡುವ ಹಳ್ಳಿಗಳ ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ ಹಂಪಯ್ಯ ನಾಯಕ ಸಾಹುಕಾರ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ವಸಂತ್ ನಾಯಕ್, ಶರಣಯ್ಯ ನಾಯಕ್ ಕೆ ಗುಡದಿನ್ನಿ, ಚನ್ನಬಸವ ಕಪಗಲ್, ಹನುಮಂತ ಬಲ್ಲಟಿಗಿ,ಲಿಂಗಪ್ಪ ಕರಡಿಗುಡ್ಡ ಹಾಗೂ ಇತರೇ ಮುಖಂಡರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here