ಪಡಿತರ ಅಕ್ಕಿ ಆಕ್ರಮ ಸಾಗಣೆದಾರರನ್ನು ಬಂಧಿಸುವAತೆ ಮನವಿ
ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಛೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದಪಡಿತರ ಅಕ್ಕಿ ಆಕ್ರಮ ಸಾಗಣೆದಾರರನ್ನು ಬಂಧಿಸುವAತೆ ಒತ್ತಾಯಿಸಿ ತಹಸೀಲ್ದಾರ್ ಅಬ್ದುಲ್ ವಾಹಿದ್ ರವರಿಗೆ ಮನವಿ ಸಲ್ಲಿಸಿ ತಾ.ಅಧ್ಯಕ್ಷ ಸಿದ್ದಪ್ಪ ದೊಡ್ಡಮನಿ ಮಾತನಾಡಿ ಪಟ್ಟಣದಲ್ಲಿ ಇತ್ತೀಚ್ಚಿಗೆ ಜಿಲ್ಲಾಧ್ಯಕ್ಷ ಬಸವರಾಜ ನಕ್ಕುಂದಿರವರು ಪಡಿತರ ಆಹಾರಧ್ಯಾನ್ಯ ತುಂಬಿದ ಲಾರಿಯನ್ನು ಕಂಡು ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ವಶಕ್ಕೆ ವಪ್ಪಿಸಿರುವುದನ್ನು ಸಹಿಸದ ಪಡಿತರ ಅಕ್ಕಿ ಆಕ್ರಮ ಸಾಗಣೆದಾರರು ಅವರ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೇ ನಡೆಸಿದ್ದು ಹಾಗೂ ಕೇಲವು ದುಷ್ಕರಮಿಗಳು ಮಾನ್ವಿಯಲ್ಲಿನ ಅವರ ಮನೆಯ ಸುತ್ತಮುತ್ತ ಅನುಮಾನಸ್ಪದವಾಗಿ ತಿರುಗಾಡುತ್ತಿರುವುದು ಕಂಡುಬಂದ್ದಿದು ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆಯನ್ನು ನೀಡಬೇಕು ಹಾಗೂ ಅರೋಪಿತರನ್ನು ಬಂಧಿಸ ಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಭಾಸ್ಕರ್ ಜಗ್ಲಿ,ಪರಶುರಾಮ ಬಾಗಲವಾಡ,ಶಿವಪ್ಪ ಸಾಧು,ಯಲ್ಲಪ್ಪ ಸೀಕಲ್,ಶಿವಾನಂದ ದೊಡ್ಡಮನಿ,ಹುಸೇನಪ್ಪ ಸವಾರಿ ಸೇರಿದಂತೆ ಇನ್ನಿತರರು ಇದ್ದರು