ಮಾನವಿ ದಿನಾಂಕ 24-10-2021ರಂದು ಮಾನ್ವಿ ನಗರದ ಎಪಿಎಂಸಿ ಸಭಾಂಗಣದಲ್ಲಿ ಪಿಂಜಾರ ನದಾಫ್ ಸಂಘದ ರಜತಮಹೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಿಂಜಾರ ನದಾಫ್ ಸಂಘದ ಜಿಲ್ಲಾ ಅಧ್ಯಕ್ಷ ಮಹಬೂಬ್ಸಾಬ್ ಪಾಮನಕಲ್ಲೂರ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು
ನಂತರ ಮುಖಂಡರಾದ ಮೊಹಮ್ಮದ್ ಇಸ್ಮಾಯಿಲ್ ಮೂಲ ಮಾತನಾಡಿ ಪಿಂಜಾನ್ ನದಾಫ್ ಸಮುದಾಯದ ಸುಮಾರು 28 ಲಕ್ಷ ಜನ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ ಆದರೆ ಸಮುದಾಯ ಸರಕಾರದಿಂದ ರಾಜಕಾರಣಿಗಳಿಂದ ಮತ್ತು ಇತರೆ ಶಕ್ತಿಗಳಿಂದ ತುಳಿತಕ್ಕೊಳಗಾಗಿ ಸಮುದಾಯ ಸಮುದಾಯ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಬೆಳೆಯಬೇಕಾದರೆ ಸರ್ಕಾರಗಳು ಈ ಸಮುದಾಯಕ್ಕೆ ವಿಶೇಷವಾದಂತಹ ಪ್ಯಾಕೇಜುಗಳನ್ನು ನೀಡಿ ಮತ್ತು ರಾಜಕೀಯ ರಂಗದಲ್ಲಿ ಮೇಲೆತ್ತುವ ಕೆಲಸ ಆಗಬೇಕಿದೆ ಎಂದು ಹೇಳಿದರು ಈಗಾಗಲೇ ಅದೆಷ್ಟೋ ಬಾರಿ ನಮ್ಮನ್ನಾಳುವ ಸರಕಾರಗಳಿಗೆ ಒತ್ತು ನೀಡಲಾಗಿದೆ ಪಿಂಜಾರ ನದಾಫ್ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಬೇಕೆಂದು ಹೋರಾಟ ಮಾಡುತ್ತ ಬಂದಿದ್ದೇವೆ ಈಗಲೂ ಸಹ ರಾಜ್ಯಮಟ್ಟದ ಈ ವಿಶೇಷ ಸಭೆಯಲ್ಲಿ ಸರ್ಕಾರಕ್ಕೆ ಆಗ್ರಹ ಮಾಡಲಾಗುವುದು ಎಂದು ಸಮುದಾಯದ ಮುಖಂಡ ಮಾಜಿ ಪುರಸಭೆ ಅಧ್ಯಕ್ಷ ಮಹಮ್ಮದ್ ಮೂಲಕ ಸ್ಮೈಲ್ ಹೇಳಿದರು.
ಪಿಂಜಾರ ನದಾಫ್ ಸಂಘದ ಸಿರವಾರದ ಅಧ್ಯಕ್ಷ ಮೌಲಸಬ್ ಗಣದಿನ್ನಿ ಮಾತನಾಡಿ ರಜತ ಮಹೋತ್ಸವ ಮತ್ತು ರಾಜ್ಯಮಟ್ಟದ ವಿಶೇಷ ಸಭೆ ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮುಖಂಡರು ತಾಲೂಕ ಅಧ್ಯಕ್ಷರು ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಮುದಾಯದ ಪ್ರತಿಯೊಬ್ಬ ಪ್ರತಿಯು ವ್ಯಕ್ತಿಯು ಈ ಸಭೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು