ದಲಿತ ಮಹಿಳೆ ಬಾಲಮ್ಮ ಹತ್ಯೆ ಪ್ರಕರಣ ಗಲ್ಲು ಶಿಕ್ಷೆಗೆ ಆಗ್ರಹ

ರಾಜ್ಯದಲ್ಲಿ ಅನೇಕ ಕಡೆ ದಲಿತರ ಮೇಲೆ ಅತ್ಯಾಚಾರ ಪ್ರಕರಣ ನಡೆಯುತ್ತಿವೆ. ಇಂತಹ ಪ್ರಕರಣ ಮತ್ತೇ ಮರುಕಳುಹಿಸದಂತೆ ಆಗ್ರಹ

0
78

ರಾಯಚೂರು.ಅ.೦೭- ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ್ ಗ್ರಾಮದಲ್ಲಿ ದಲಿತ ಮಹಿಳೆ ಬಾಲಮ್ಮ ಹತ್ಯೆ ಪ್ರಕರಣ ಸಂಬಂಧಿಸಿ ಗಂಗಪ್ಪ ಮತ್ತು ಇನ್ನಿತರರನ್ನು ಪೊಲೀಸರು ವಶಪಡಿಸಿಕೊಂಡು ಗಲ್ಲು ಶಿಕ್ಷೆಗೆ ಗುರಿ ಪಡಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸೇನೆಯೂ ಇಂದು ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ದಲಿತ ಮಹಿಳೆ ಬಾಲಮ್ಮ ಇವರ ಕೊಲೆಗೆ ಸಂಬಂಧಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಬಾಲಮ್ಮನ ಮೇಲೆ ಅತ್ಯಾಚಾರವೆಸಗಿ, ಗಂಗಪ್ಪ ಮತ್ತಿತರರು ಎಚ್ಚರ ತಪ್ಪುವಂತೆ ಮಾಡಿ. ಪೆಟ್ರೋಲ್ ಸುರಿದ ಬೆಂಕಿ ಹಚ್ಚಿ, ಸಜೀವ ದಹನ ಮಾಡಿದ್ದಾರೆ. ಇಂತಹ ಅಮಾನವೀಯ ಕೃತ್ಯವೆಸಗಿದ ಅಪರಾಧಿಗಳನ್ನು ಕೂಡಲೇ ವಶಕ್ಕೆ ತೆಗೆದುಕೊಂಡು ಇದಕ್ಕೆ ಕಾರಣೀಭೂತರಾದವರನ್ನು ಕಠಿಣವಾಗಿ ಶಿಕ್ಷಿಸಬೇಕು. ಈಗಾಗಲೇ ರಾಜ್ಯದಲ್ಲಿ ಅನೇಕ ಕಡೆ ದಲಿತರ ಮೇಲೆ ಅತ್ಯಾಚಾರ ಪ್ರಕರಣ ನಡೆಯುತ್ತಿವೆ. ಇವರಿಗೆ ನ್ಯಾಯ ಒದಗಿಸಬೇಕು ಮತ್ತು ಇಂತಹ ಪ್ರಕರಣ ಮತ್ತೇ ಮರುಕಳುಹಿಸದಂತೆ ಆಗ್ರಹಿಸಲಾಯಿತು

LEAVE A REPLY

Please enter your comment!
Please enter your name here