ಉದ್ಯಾನ ಯಕ್ಕೆ ಮೀಸಲಿಟ್ಟ ಭೂಮಿ ಉಳಿಸುವ ಹೊರಾಟ 75ನೇ ದಿನಕ್ಕೆ

0
88
  • ಮಾನವಿ: ನಗರದ ಹೃದಯ ಭಾಗದಲ್ಲಿರುವ ಸ, ನಂ : 467 ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಸಾರ್ವಜನಿಕ ಉದ್ಯಾನಕ್ಕಾಗಿ ಮೀಸಲಿಟ್ಟ ಜಾಗವನ್ನು ಕಬಳಿಸಿ ಆ ಜಾಗದಲ್ಲಿ ಕಂಪೌಂಡ್ ಕಟ್ಟಿರುವ ಎನ್ ಎಸ್ ಬೋಸರಾಜ್ ಇವರ ಮೇಲೆ ಸರಕಾರಿ ಭೂಕಬಳಿಕೆಯ ಪ್ರಕರಣ ದಾಖಲಿಸಿ ಬಂಧಿಸಬೇಕು ಮತ್ತು ಭೂಗಳ್ಳರಿಗೆ ಸಹಕಾರ, ಕಟ್ಟಡ ಪರವಾನಿಗೆ ನೀಡಿ ಭೂಗಳ್ಳರ ಪರವಾಗಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ ಪುರಸಭೆಯ ಮುಖ್ಯಧಿಕಾರಿ ಜಗದೀಶ ಭಂಡಾರಿ ರವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕೆಂದು ಸರಕಾರಿ ಜಾಗ ರಕ್ಷಣಾ ಸಮಿತಿ ಇಂದ ನಡೆಯುತ್ತಿರುವ  ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಹೋರಾಟ 74ನೇ ದಿನಕ್ಕೆ ಕಾಲಿಟ್ಟಿದೆ ಎಂದು ಹೋರಾಟಗಾರ ನಾಗಲಿಂಗಯ್ಯ ಸ್ವಾಮಿ ಹೇಳಿದರು

ಇನ್ನು ಮುಂದೆ ಈ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯುವುದು ಮತ್ತು ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಪತ್ರ ಕೊಡುವ ಮೂಲಕ ಒತ್ತಡ ಹೇರಲಾಗುವುದು ಮತ್ತು ಭೂಗಳ್ಳರಿಗೆ ತಕ್ಕ ಶಿಕ್ಷೆ ನೀಡುವಂತೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here