ರಾಬಿತ-ಏ-ಮಿಲ್ಲತ್ ಇಡೀ ರಾಜ್ಯಕ್ಕೆ ಮಾದರಿ; ಮೌಲಾನ ಯೂಸುಫ್ ಕನ್ನಿ

ರಾಬಿತ-ಏ-ಮಿಲ್ಲತ್ ಮಾನವಿಯ 2ನೇ ವಾರ್ಷಿಕ ಸಮಾರಂಭ

0
104

ಮಾನವಿ: ದಲಿತರ ಮತ್ತು ಅಲ್ಪಸಂಖ್ಯಾತರ ಮೇಲೆ ಆದಿವಾಸಿಗಳ ಮೇಲೆ ಹಾಗೂ ಕೆಳವರ್ಗದ ಜನರ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ವಿವಿಧ ಸಮುದಾಯಗಳು ಒಗ್ಗಟ್ಟಾಗಬೇಕಿದೆ ಎಂದು ರಾಬಿತ-ಏ-ಮಿಲ್ಲತ್ ನ ರಾಜ್ಯ ಸಂಚಾಲಕ ಮೌಲಾನಾ ಯೂಸುಫ್ ಕನ್ನಿ ಬೆಂಗಳೂರು ಹೇಳಿದರು 

ಅವರು ಇಂದು ಮಾನವಿ ನಗರದ ಈದ್ಗಾ ಶಾದಿಮಹಲಿನಲ್ಲಿ ಜರುಗಿದ ರಾಬಿತ-ಏ-ಮಿಲ್ಲತ್ ನ 2ನೇ ವಾರ್ಷಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು

ಇಂದು ದೇಶದಲ್ಲಿ ಸಾರ್ವಜನಿಕ ರಲ್ಲಿ ದ್ವೇಷ ಅಸೂಯೆ ಮತ್ತು ಅಸಹನೆ ಬಿತ್ತುವ ಕೆಲಸ ಆಗುತ್ತಿದೆ ಸದೃಡ ಸಮಾಜ ವನ್ನು ಕಟ್ಟುವ ನಿಟ್ಟಿನಲ್ಲಿ ಎಲ್ಲಾ ಧರ್ಮೀಯರು ಪರಸ್ಪರ ಪ್ರೀತಿ ವಿಶ್ವಾಸ ದಿಂದ ಬಾಳಬೇಕಾಗಿದೆ, ಸಮಾಜದ ಬಡವರ ದೀನದಲಿತರು ಮತ್ತು ತುಳಿತಕ್ಕೆ ಒಳಗಾದ ವರ್ಗವನ್ನು ಎತ್ತಿಕಟ್ಟುವ ಕೆಲಸ ಮಾಡಲು ಅನಾಥ ಮಕ್ಕಳು ವಿಧವೆಯರು ಮತ್ತು ವೃದ್ಧರ ಸೇವೆ ಮಾಡುವ ನಿಟ್ಟಿನಲ್ಲಿ ರಾಬಿತ-ಏ-ಮಿಲ್ಲತ್ ಸ್ಥಾಪನೆಯಾಗಿದೆ ಎಂದು ಅವರು ಹೇಳಿದರು. ರಾಬಿತ-ಏ-ಮಿಲ್ಲತ್ ಮಾನವಿ ಘಟಕವು ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು. ಸಮಾಜದ ಪ್ರತಿಯೊಬ್ಬ ವ್ಯಕ್ತಿ ರಾಬಿತ-ಏ-ಮಿಲ್ಲತ್ ವೇದಿಕೆ ಗೆ ಸಹಕರಿಸಬೇಕೆಂದು ಕರೆ ಕೊಟ್ಟರು

ನಂತರ ನಗರದ ವಿವಿಧ ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಮಾತನಾಡಿದರು ಅಗಲ ಸುನ್ನತ್ ಜಮಾತ್ ನ ಮುಖಂಡ ಸೈಯದ್ ಸಜ್ಜಾದ್ ಹುಸೇನ್ ಮತ್ವಾಲೆಗುರು, ಮಹದವಿಯಾ ಜಮಾತ್ ನ ಗುರುಗಳಾದ ಸೈಯದ್ ಮುಸ್ತಫಾ ಮಿಯಾ ಮುರ್ಶಿದ್, ತಬ್ಲೀಗಿ ಜಮಾತ್ ಮತ್ತು ಜಮಿಯತುಲ್ ಉಲಮಾ ಸಂಘಟನೆಯ ಗುರುಗಳು ಮೌಲಾನಾ ಮುಫ್ತಿ ಸೈಯದ್ ಹಸನ್ ಜೀಶಾನ್ ಖಾದ್ರಿ ಖಾಸ್ಮಿ, ಜಮಾತೇ ಇಸ್ಲಾಮಿ ಹಿಂದ್ ನ ಜಿಲ್ಲಾ ಸಂಚಾಲಕ ಮೌಲಾನಾ ಅನ್ವರ್ ಪಾಷ ಉಮರಿ, ಅಹಲ್ಯಾ ಹದೀಸ್ ಜಮಾತ್ ನ ಮೌಲಾನಾ ಇಮ್ರಾನ್ ಮ ಹಾಗೂ ರಾಬಿತ-ಏ-ಮಿಲ್ಲತ್ ನ ಅಧ್ಯಕ್ಷ ರಾದ ಸೈಯದ್ ಅಕ್ಬರ್ ಪಾಷ ರವರು ಮಾತನಾಡಿದರು.

ನಂತರ ಕೊವಿಡ್-19 ಸಂದರ್ಭದಲ್ಲಿ ರಾಬಿತ-ಏ-ಮಿಲ್ಲತ್ ಮಿಲ್ಲತ್ ಜೊತೆಗೆ ಕೈಜೋಡಿಸಿ ತನ್ನ ಆಂಬುಲೆನ್ಸ್ ಸೇವೆ ಕೊವಿಡ್ ಸೋಂಕಿತರ ಸೇವೆ ಗಾಗಿ ಉಚಿತ ವಾಗಿ ನೀಡಿದ ಡಾ! ರೋಹಿಣಿ ಜಗನ್ನಾಥ ಮಾನ್ವಿಕರ್ , ಡಾ! ಅರುಣ್ ಮಸ್ಕಿ, ಡಾಕ್ಟರ್ ಬಾಸಿತ್ ಲತೀಫ್ ಹಾಗೂ ಉತ್ತಮ ರೀತಿಯಲ್ಲಿ ರಾಬಿತ-ಏ-ಮಿಲ್ಲತ್ ಜೊತೆ ಕಾರ್ಯನಿರ್ವಹಿಸಿದ ಡಾ! ಆಸಿಫ್ ಮತ್ತು ಸ್ವಯಂ ಸೇವಕರಾಗಿ ರೋಗಿಗಳ ಸೇವೆ ಸಲ್ಲಿಸಿದ ಜಾವಿದ್,ಲಾಲ ಮಿಯಾ ಮತ್ತು ಸೈಯದ್ ಅರ್ಷದ್ ಇವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಪುರಸಭೆ ಸದಸ್ಯ ಫರೀದ್ ಉಮರಿ ಪ್ರಾಸ್ತಾವಿಕ ಮಾತನಾಡಿದರು ಎಮ್ ಎ ಎಚ್ ಮುಖೀಮ್ ನಿರೂಪಿಸಿದರು ಸಾಬಿರ್ ಪಾಷ ಧನ್ಯವಾದಗಳನ್ನ ಅರ್ಪಿಸಿದರು.

ವೇದಿಕೆಯಲ್ಲಿ ಮುಸ್ಲಿಮ್ ಸಮಾಜದ ಮುಖಂಡರುಗಳು, ಎಲ್ಲಾ ಮಸೀದಿ ಗಳ ಅಧ್ಯಕ್ಷರು ಸಮಾಜದ ಪುರಸಭಾ ಸದಸ್ಯರು ಮತ್ತು ಸಮಾಜದ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಈದ್ಗಾ ಕಮೀಟಿ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಸಮಾಜದ ಮುಖಂಡರಾದ ರಫೀ ಸಾಹುಕಾರ, ನಸೀರ್ ಸಾಹುಕಾರ, ನಿಜಾಮ್ ಪಾಷ, ಯದುಲ್ಲ ಹುಸೇನಿ ಮತ್ವಾಲೆ , ವಕೀಲರು, ಸೈಯದ್ ಆರಿಫ್ ಖಾದ್ರಿ ,ಖಲೀಲ್ ಖುರೇಶಿ, ನಿಜಾ ಪುರಸಭೆ ಸದಸ್ಯರಾದ ಜೀಲಾನಿ ಖರೇಶಿ, ಸಾಬಿರ್ ಪಾಷ ಇಬ್ರಾಹೀಂ ಖುರೇಶಿ, ಸುಪ್ರೀಂ ಟೇಲರ್, ,ಮತ್ತು ರಾಬಿತ-ಏ-ಮಿಲ್ಲತ್ ನ ಪದಾಧಿಕಾರಿಗಳಾದ ಸಾದಿಕ್ ಪಾಷ ಬಾಬುಲ್, ಸಿರಾಜುದ್ದೀನ್ ಖಾದ್ರಿ, ಮೌಲಾನ ಸಿಕಂದರ್,ಮೊಹಮ್ಮದ್ ಸಲೀಮ್, ಯೂಸುಫ್ ಖಾನ್, ಪುರಸಭೆ ಸದಸ್ಯ ಹುಸೇನ್ ಬಾಷ ಹೆಚ್ ಬಿ ಎಮ್ , ಮಾನವಿ ಐಡಿಯಲ್ ಗ್ರೂಪ್ ನ ಪದಾಧಿಕಾರಿಗಳು ಎಸ್ ಐ ಓ ಸಂಘದ ಪದಾಧಿಕಾರಿಗಳು ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here