ಅಕ್ಟೋಬರ್ 02ರಂದು ರಾಬಿತಯೇ ಮಿಲ್ಲತ್ ಎರಡನೇ ವಾರ್ಷಿಕ ಸಮಾರಂಭ; ಸೈಯದ್ ಸಾಧಿಕ್ ಪಾಷಾ ಬಾಬುಲ್

ಬದಕು ಸಂಕ್ಷಿಪ್ತ ಕಾರಣ ಒಳ್ಳೆಯ ಕೆಲಸ ಮಾಡೊಣ; ಅಕ್ಬರ್ ಪಾಷ

0
178

ಮಿಲ್ಲತ್ ಕಾ ಇತ್ತೇಹಾದ್ ಮಿಲ್ಲತ್ ಕಿ ಶಾನ್. ಸಮುದಾಯದ ಒಗ್ಗಟ್ಟು ಸಮುದಾಯದ ಘನತೆ. 

ಮಾನವಿ ಅಕ್ಟೋಬರ್ 30 :   ರಾಬಿತ ಮಿಲ್ಲತ ವತಿಯಿಂದ ಎರಡು   ವರ್ಷಗಳಿಂದ ಸತತವಾಗಿ ಜನಸೇವೆ ಮಾಡಿರುವ ವರದಿಯನ್ನು ಸಾರ್ವಜನಿಕರನ್ನು ತಿಳಿಸುವ ನಿಟ್ಟಿನಲ್ಲಿ ಮತ್ತು ಈ  ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಸಿಗಲಿ ಅನ್ನುವ ಉದ್ದೇಶದಿಂದ ದಿನಾಂಕ ಅಕ್ಟೋಬರ್ ಎರಡರಂದು ಶನಿವಾರ ಸಂಜೆ 06:30ಕ್ಕೆ ರಾಬಿತಾ ವೇದಿಕೆ ವತಿಯಿಂದ ನಗರದ ಈದ್ಗಾ ಶಾದಿ ಮಹಲ್ ನಲ್ಲಿ “ಮಿಲ್ಲತ್ ಕಾ ಇತ್ತೇಹಾದ್ ಮಿಲ್ಲತ್ ಕಿ ಶಾನ್. ಸಮುದಾಯದ ಒಗ್ಗಟ್ಟು ಸಮುದಾಯದ ಘನತೆ” ಎಂಬ ವಿಷಯದ ಮೇಲೆ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಮುಖಂಡರಾದ ಸೈಯದ್ ಸಾಧಿಕ್ ಪಾಶ ಬಾಬುಲ್ ಹೇಳಿದರು

ಅವರು ಇಂದು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮಾಡುವ ಮೂಲಕ ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು ಮತ್ತು ಎರಡು ವರ್ಷದ ಅವಧಿಯಲ್ಲಿ ಸಾರ್ವಜನಿಕರಿಗೆ  ಉಚಿತವಾಗಿ ರಾಶನ್ ಕಾರ್ಡ್, ವೋಟರ್ ಐಡಿ ಕಾರ್ಡ್, ಲೇಬರ್ ಕಾರ್ಡ್, ಮತ್ತು ವಿದ್ಯಾರ್ಥಿವೇತನ, ಆದರ್ಶ ಶಾಲೆಗೆ ಅರ್ಜಿ ಮತ್ತು ಇತರೆ ಸರಕಾರಿ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಅಂಗವಾಗಿ ಉಚಿತ ಅರ್ಜಿ ಹಾಕುವ ವ್ಯವಸ್ಥೆ ಮಾಡಿಕೊಡಲಾಯಿತು ಮತ್ತು ಕೊವಿಡ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಇದ್ದಾಗ ರೋಗಿಗಳ ಸೇವೆಗಾಗಿ ಆಕ್ಸಿಜನ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ ಜೊತೆಗೆ  ಸಾರ್ವಜನಿಕ ಸೇವೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಸಹ ಮಾಡಲಾಗಿದೆ ಈ ಒಂದು ನಿಟ್ಟಿನಲ್ಲಿ ವೇದಿಕೆಯ ಜನಸೇವೆಯ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತಿಳಿಯಬೇಕು ಮತ್ತು ಸಾರ್ವಜನಿಕರ ಸಹಕಾರ ಬೇಕು ಎನ್ನುವಂತಹ ಉದ್ದೇಶದಿಂದ ಎರಡನೇ ವಾರ್ಷಿಕ ಸಮಾರಂಭವನ್ನು ಏರ್ಪಡಿಸಲಾಗುತ್ತದೆ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಬೇಕೆಂದು ಕೊರಿದರು.

ನಂತರ ವೇದಿಕೆ ಅಧ್ಯಕ್ಷ ಅಕ್ಬರ್ ಪಾಷ ಸಾಬ್ ಮಾತನಾಡಿ ಈ ಬಹಿರಂಗ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆ ಯ ರಾಜ್ಯ ಸಂಚಾಲಕ ಜನಾಬ್ ಮೌಲಾನಾ ಯೂಸುಫ್ ಕನ್ನಿ ಬೆಂಗಳೂರು ಆಗಮಿಸಲಿದ್ದಾರೆ ಎಂದು ಹೇಳಿದರು.

ಸೈಯದ್ ಸಜ್ಜಾಗಿ ಹುಸೇನ್ ಮತ್ವಾಲೆ, ಮೌಲಾನಾ ಜೀಶಾನ್ ಇವರುಗಳು ಸಹ ಪತ್ರಕರ್ತರನ್ನ ಉದ್ದೇಶಿಸಿ ಮಾತನಾಡಿದರು

ಫರೀದ್ ಉಮರಿ ನಿರೂಪಣೆ ಮಾಡಿದರು

ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ಸೈಯದ್ ಅಕ್ಬರ್ ಪಾಷಾ, ಸೈಯದ್ ಸಜ್ಜಾದ್ ಹುಸೇನ್ ಮತ್ ವಾಲೆ ಮೌಲಾನಾ ಹಸನ್ ಜೀಶಾನ್, ಮೊಲಾನ ಅನ್ವರ್ ಪಾಷಾ ಪುರಸಭೆ ಸದಸ್ಯರಾದ ಫರೀದ್ ಉಮರಿ ಹಾಗೂ ಎಚ್ ಬಿ ಎಂ ಬಾಷ, ಮುಖಂಡರಾದ ಯೂಸುಫ್ ಖಾನ್, ಸಲೀಮ್ ಸಾಬ್, ಎಂ ಎ ಎಚ್ ಮುಖೀಮ್, ಶೇಕ್ ಬಾಬ ಹುಸೇನ್, ಕೆಎಂ ಬಾಷ  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here