ತಾಲೂಕ ವಕೀಲರ ಸಂಘದಿಂದ ಸಂತಾಪ

0
98

ಮಾನವಿ :- ತಾಲೂಕಿನ ವಕೀಲರ ಸಂಘದ ಹಿರಿಯ ಸದಸ್ಯ ಸಂಘದ ಮಾಜಿ ಉಪಾಧ್ಯಕ್ಷ ನಾರಾಯಣಪ್ಪ ನಾಯಕ ಇವರು ಇಂದು ಹೃದಯಾಘಾತದಿಂದ ಮೃತರಾಗಿದ್ದು ಮಡದಿ ಇಬ್ಬರು ಮಕ್ಕಳನ್ನು ಬಿಟ್ಟು ಅಗಲಿದ್ದು ಅವರ ಕುಟುಂಬಕ್ಕೆ ಮತ್ತು ವಕೀಲರ ಸಂಘಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಹಿರಿಯ ವಕೀಲರಾದ ಎ ಬಿ ಉಪ್ಪಳಮಠ ಹೇಳಿದರು..

ತಾಲೂಕ ವಕೀಲರ ಸಂಘದಿಂದ ಮೃತರಾದ ನಾರಾಯಣ ನಾಯಕ ಗವಿಗಟ್ಟ ( 57 ) ಹಾಗೂ ಚಂದ್ರಕಲಾಧರ ಸ್ವಾಮಿ ( 72 ) ಇವರಿಗೆ ಮೌನಚಾರಣೆಯ ಮೂಲಕ ಸಂತಾಪ ಸೂಚಿಸಿದರು‌..

ನಂತರ ಮಾತಾನಾಡಿದ ಹಿರಿಯ ವಕೀಲರು ಮಾತಾನಾಡಿ ನಾರಾಯಣ ನಾಯಕ ಇವರು ಸರಳ ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದರು ಮತ್ತು ಎಲ್ಲರೊಡನೆ ಸ್ನೇಹ ಸ್ವಾಭಾವದಿಂದ ಇದ್ದವರು ಇವರ ಅಗಲಿಕೆಯಿಂದ ನಮ್ಮ ಸಂಘಕ್ಕೆ ಮತ್ತು ಕುಟುಂಬಕ್ಕೆ ತುಂಬಾಲಾಗದ ನಷ್ಟವಾಗಿದೆ ಸಂಘದಿಂದ ಮತ್ತು ಬಾರ್ ಕೌನ್ಸಿಲಿನಿಂದ ಬರಬೇಕಾದ ಅನುದಾನವನ್ನು ಅದಷ್ಟು ಬೇಗ ನೀಡುವ ಪ್ರಯತ್ನ ಮಾಡಬೇಕಾಗಿದೆ ಎಂದರು ನಂತರ ನಾರಾಯಣಪ್ಪ ಅವರ ಮಕ್ಕಳು ಕೂಡ ಇನ್ನೂ ಚಿಕ್ಕವರಾಗಿದ್ದು ಅವರ ವಿದ್ಯಾಭ್ಯಾಸ ಉತ್ತಮವಾಗಿರುವಂತೆ ದೇವರು ಆಶಿರ್ವಾದಿಸಲಿ ಎಂದು ಹಾರಿಸಿದರು..

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ,ಕಾರ್ಯದರ್ಶಿ ರವಿಕುಮಾರ್ ಪಾಟೀಲ, ಖಜಾಂಚಿ ಚಂದ್ರಶೇಖರ ಮದ್ಲಾಪೂರ ಸೇರಿದಂತೆ ಹಿರಿಯ ವಕೀಲರಾದ ಎ ಎನ್ ರಾಜು. ಗುಮ್ಮ ಬಸವರಾಜ. ಎಂ ವೀರನಗೌಡ.ಬಸವರಾಜ ಗೋವಿಂದದೊಡ್ಡಿ. ಶಿವಕುಮಾರ್ ಸ್ವಾಮಿ.ಮೌನೇಶ ರಾಠೋಡ. ಹನುಮಂತಪ್ಪ ಜಲ್ಲಿ.ಅಶೋಕ ಮುಸ್ಟೂರು.ವಿಶ್ವನಾಥ ಮೂಸ್ಟೂರು.ಸಮ್ದಾನಿ ಸಿದ್ದಕಿ ಹನುಮಂತ ನಂದಿಹಾಳ ಸೇರಿದಂತೆ ಅನೇಕ ಹಿರಿಯ ಕಿರಿಯ ಮಹಿಳಾ ವಕೀಲರು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here