ಆಸ್ಸಾಂ ಸರ್ಕಾದ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ
ಸಿಂಧನೂರು: ಅಸ್ಸಾಮಿನಲ್ಲಿ ಭೂಮಿ ಕೇಳಿದ ಅಮಾಯಕ ಬಡವರ ಮೇಲೆ ಹಾಡಹಗಲೇ ಗುಂಡು ಹಾರಿಸಿದ ಅಸ್ಸಾಂ ಸರ್ಕಾರದ ದೌರ್ಜನ್ಯ ವಿರೋಧಿಸಿ ಇಂದು ಸಾಲಿಡಾರಿಟಿ ಕರ್ನಾಟಕ, ಎಸ್ಐಒ, ಜಿಐಒ ಸಂಘಟನೆಗಳ ನೇತೃತ್ವದಲ್ಲಿ ಸಿಂಧನೂರು ಗಾಂಧಿ ಪ್ರತಿಮೆ ಎದುರು ಪ್ರತಿಭಟನಾ ಪ್ರದರ್ಶನ ಜರುಗಿತು.
ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ತಹಶಿಲ್ದಾರರ ಕಚೇರಿಗೆ ಬಂದು ಮನವಿ ಸಲ್ಲಿಸಲಾಯಿತು.
ಪ್ರದರ್ಶನ ಉದ್ದೇಶಿಸಿ ಜಮಾತೆ ಇಸ್ಲಾಮೀ ಹಿಂದ್ ಸಿಂಧನೂರು ಅಧ್ಯಕ್ಷರಾದ ಮುಹಮ್ಮದ್ ಹುಸೇನ್, ಪ್ರಗತಿಪರ ಮುಖಂಡರಾದ ದೇವೇಂದ್ರ ಗೌಡ, ನಾಗರಾಜ್ ಪೂಜಾರ್, ಇಮ್ತಿಯಾಜ್, ಖಾದರ್ ಸುಬ್ಹಾನಿ ಮಾತನಾಡಿದರು.
ಸಾಲಿಡಾರಿಟಿ ಸಿಂಧನೂರು ಅಧ್ಯಕ್ಷ ಡಾ.ವಸೀಮ್ ಅಹ್ಮದ್ ಮನವಿ ಓದಿ ತಹಶಿಲ್ದಾರರಿಗೆ ಸಲ್ಲಿಸಿದರು.
ಪ್ರತಿಭಟನೆಗೆ ಬೆಂಬಲಿಸಿ ಬಸವರಾಜ ಬಾದರ್ಲಿ, ಶೇಕ್ಷಾಖಾದ್ರಿ, ಯಂಕಪ್ಪ ಕೆಂಗಲ್, ಜಿಐಒ, ಎಸ್ಐಒ ಕಾರ್ಯಕರ್ತರು ಸೇರಿದಂತೆ ಹಲವಾರು ಜನ ಭಾಗವಹಿಸಿದರು.