ಯೋಗಿತಾ ಬಾಯಿ ಮೇಲಿನ ಹಲ್ಲೆ ಖಂಡನೀಯ ಶ್ರೀದೇವಿ ತಮ್ಮ ವರ್ತನೆ ತಿದ್ದಿಕೊಳ್ಳಲಿ: ಪದ್ದಮ್ಮ.
ಸಿಂಧನೂರು,ನ.6– ಸ್ತಿಶಕ್ತಿ ಒಕ್ಕೂಟದಿಂದ ಮಹಿಳೆಯರಿಗೆ ಯಾವುದೇ ಅನುಕೂಲವಾಗಿಲ್ಲ. ಸ್ತಿಯರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇಂದಿರಾ ಗಾಂಧಿ ಸ್ತಿಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ತಮ್ಮ ವರ್ತನೆ ತಿದ್ದಿಕೊಳ್ಳಬೇಕು ಎಂದು ಮಾಜಿ ನಗರಸಭೆ ಅಧ್ಯಕ್ಷೆ ಪದ್ದಮ್ಮ ಆರೋಪಿಸಿದರು.
ಅವರು ನಗರದ ರಾಜೇಂದ್ರಕುಮಾರ ಶಾಲೆಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಒಕ್ಕೂಟದಲ್ಲಿ ಶ್ರೀದೇವಿ ಸಾಕಷ್ಟು ಅವ್ಯವಹಾರ ಮಾಡಿದ್ದು, ಕೂಡಲೇ ಸಮಗ್ರವಾದ ತನಿಖೆ ನಡೆಸಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮಹಿಳಾ ಮುಖಂಡರಾದ ಸರಸ್ವತಿ ಪಾಟೀಲ್ ಮಾತನಾಡಿ, ನಗರದ ತಾ.ಪಂ.ಗೆ ಸಂಬAಧಿಸಿದ ಸ್ತಿಶಕ್ತಿ ಸಮೂಹದ ಕಟ್ಟಡಕ್ಕೆ ಸಂಬAಧಿಸಿದ ಪರಿಶೀಲನೆಗೆ ಬಂದಿದ್ದ ಎಸಿಡಿಪಿಓ ಯೋಗಿತಾ ಬಾಯಿ ಮೇಲೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಲ್ಲೆ ಮಾಡಿದ್ದು, ಈ ಬಗ್ಗೆ ತಹಶೀಲ್ದಾರರಿಗೂ ಲಿಖಿತ ದೂರು ನೀಡಿದ್ದಾರೆ. ಈ ಹಿಂದೆಯೂ ನಗರಸಭೆ ಪರಿಸರ ಅಭಿಯಂತರರ ಮೇಲೆಯೂ ಹಲ್ಲೆ ಮಾಡಿದ್ದರು ಎಂದು ದೂರಿದರು.
ಶಾಸಕ ವೆಂಕಟರಾವ ನಾಡಗೌಡ ಮಹಿಳಾ ವಿರೋಧಿ ಎಂದು ಶ್ರೀದೇವಿ ಶ್ರೀನಿವಾಸರ ಹೇಳಿಕೆ ಖಂಡನೀಯವಾದುದು. ನೂರಾರು ಮಹಿಳೆಯರು ದೂರು ನೀಡಿದ ಹಿನ್ನಲೆಯಲ್ಲಿ ಸಂಬಧಿಸಿದ ಅಧಿಕಾರಿಗಳಿಗೆ ಪರಿಶೀಲನೆ ಮಾಡಲು ದೂರು ನೀಡಿದ್ದರು. ಮಹಿಳಾ ಸಬಲೀಕರಣಕ್ಕೆ ಶಾಸಕ ವೆಂಕಟರಾವ ನಾಡಗೌಡ ಶ್ರಮಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಮಹಿಳಾ ಮುಖಂಡರಾದ ಸುವರ್ಣ ಸೇಠ, ಚಂದ್ರಕಲಾ, ತಾಜ್ ಅಂಜುಮ್, ಸಾಹೀರಾ ಭಾನು, ಯಂಕಪ್ಪ ಗೊರೇಬಾಳಕ್ಯಾಂಪ್ ಹಾಗೂ ಇತರರು ಇದ್ದರು.