ಜಮಾಅತೆ ಇಸ್ಲಾಮಿ ಹಿಂದ್ ಯಾದಗಿರಿ ವತಿಯಿಂದ ಪ್ರವಾದಿ ಮುಹಮ್ಮದ್ ಮಾನವಕುಲದ ಮಾರ್ಗದರ್ಶಕ ಸೀರತ್ ಅಭಿಯಾನದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ.
ಯಾದಗಿರಿ. ನ,5.- ಪ್ರವಾದಿ ಮುಹಮ್ಮದ್ (ಸ) ಮಾನವ ಕುಲದ ಮಾರ್ಗದರ್ಶಕ ಎಂಬ ವ್ಯಾಪಿ ಸೀರತ್ಅಭಿಯಾನದ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ಯಾದಗಿರಿ ಹಾಗೂ ಎಚ್ ಆರ್ ಎಸ್ ಯಾದಗಿರಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಗರದ ಮದನ್ ಪುರ ಮುಖ್ಯ ರಸ್ತೆ ಹಾಗೂ ಬಡಾವಣೆ ಗಳಲ್ಲಿ ಕಸ ಗುಡಿಸುವ ಮೂಲಕ ಸ್ರಮಾದಾನ ಮಾಡಿ ಸಾರ್ವಜನಿಕ ರಿಗೆ ಪ್ರವಾದಿ ಜೀವನದ ಸಂದೇಶ ನೀಡಲಾಯಿತು.
ಪ್ರವಾದಿ ಮುಹಮ್ಮದ್ (ಸ) ರ ಆದೇಶ ಸ್ವಚ್ಚತೆಯು ಸತ್ಯ ವಶ್ವಾಸದ ಅರ್ಧ ಭಾಗವನ್ನೂ ವಾಗಿದ್ದು ನಮ್ಮ ಮನೆಗಳು, ಬಡಾವಣೆಗಳು ಮತ್ತು ನಮ್ಮ ನಗರವನ್ನ ಸ್ವಚ್ಛವಗಿ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಕಾರಣ ಬದುಕಿನಲ್ಲಿ ಸದಾ ಸ್ವಚ್ಚತೆಯನ್ನ ಪಾಲಿಸುತ್ತಾ ನಮ್ಮ ನಮ್ಮ ಮನಸ್ಸುಗಳನ್ನು ಮತ್ತುಅಂತರಾಳವನ್ನು ಸ್ವಚ್ಚವಾಗಿಟ್ಟು ಕೊಂಡು ಬದುಕುವ ಸಂದೇಶ ಸಾರುವ ಕಾರ್ಯ ಮಾಡಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಯಾದಗಿರಿಯ ಜಿಲ್ಲಾ ಸಂಚಾಲಕ ಮಿನ್ಹಾಜುದ್ದೀನ್ ಹುಜೂರ್ ಹೇಳಿದರು
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹಿಬೂಬ್, ಜಮಾಅತೆ ಇಸ್ಲಾಮಿ ಹಿಂದ್ ನ ಸದಸ್ಯರು ಎಚ್ ಆರ್ ಎಸ್ ನ ಪದಾಧಿಕಾರಿಗಳು ಹಾಗೂ ಪುರಸಭೆ ಪೌರಕಾರ್ಮಿಕರು ಉಪಸ್ಥಿತರಿದ್ದರು.