ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೆಂಕಟೇಶ ಪೂಜಾರಿ ವಿಧಿವಶ.

ಸರಳ ಸಜ್ಜನಿಕೆಯ ವ್ಯಕ್ತಿತ್ವದ ಕ್ಯಾದಿಗ್ಗೇರಾ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೆಂಕಟೇಶ ಪೂಜಾರಿ ನಿಧನ.

0
185

ದೇವದುರ್ಗ.,ನ,03.-  ಸರಳ ಸಜ್ಜನಿಕೆಯ ವ್ಯಕ್ತಿತ್ವದ ಕ್ಯಾದಿಗ್ಗೇರಾ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೆಂಕಟೇಶ ಪೂಜಾರಿ ಯವರು ನಿನ್ನೆ ರಾತ್ರಿ 9ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿಿಿಿಿ ದಿವಸಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು ಅವರಿಗೆ 48ವರ್ಷವಯಸ್ಸಾಗಿತ್ತು ತಂದೆ ತಾಯಿ ಮತ್ತು ಪತ್ನಿ ಓರ್ವ ಪುತ್ರ ಇಬ್ಬರು ಪುತ್ರಿಯರು 4 ಜನ ಅಣ್ಣ ತಮ್ಮಂದಿರು ಸೇರಿದಂತೆ ಅಪಾರ ಬಂಧುಗಳನ್ನು ಬಿಟ್ಟು ಆಗಲಿದ್ದಾರೆ.

.ಶಿಕ್ಷಕರಾಗಿದ್ದ ವೆಂಕಟೇಶ ಪೂಜಾರಿ ಅವರು ನಂತರ ಹುದ್ದೆ ತೊರೆದು ರಾಜಕೀಯ ಪ್ರವೇಶ ಮಾಡಿದರು 2016ರಲ್ಲಿ ದೇವದುರ್ಗ ತಾಲ್ಲೂಕಿನ ನೂತನ ಕ್ಷೇತ್ರ ವಾದ ಕ್ಯಾದಿಗ್ಗೇರಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ರಾಯಚೂರು ಜಿಲ್ಲಾ ಪಂಚಾಯತಿಗೆ ಅತ್ಯಂತ ಬಹುಮತದಿಂದ ಆಯ್ಕೆಗೊಂಡಿದ್ದರು.

ಅಲ್ಲದೆ ದೇವದುರ್ಗ ಶಾಸಕ ಕೆ. ಶಿವನಗೌಡನಾಯಕರ ಸಹೋದರಿಯ ಪತಿಯಾಗಿದ್ದು ಮಾವನ ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಇಡೀ ದೇವದುರ್ಗ ತಾಲ್ಲೂಕಿನ ಹಾಗೂ ಜಿಲ್ಲೆಯ ಪ್ರತಿಯೊಬ್ಬ ಮತದಾರರಿಗೆ ಕಾರ್ಯಕರ್ತರಿಗೆ ಅತ್ಯಂತ ಪ್ರೀತಿ ವಿಶ್ವಾಸದ ಜೋತ್ಯೆಯಲ್ಲಿ ಪ್ರತಿ ಯೋಬ್ಬರಿಗೂ ಕಷ್ಟದ ದಿನಗಳಲ್ಲಿ ಸಹಾಯ ಸಹಕಾರ ಮಾಡಿದ್ದಾರೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಭರವಸೆಯ ನಾಯಕರಾಗಿ ಬೆಳೆಯುತ್ತಿದ್ದಾಗಲೇ ಅವಸರದಲ್ಲಿ ಹೊರಟೇ ಹೋದರು.

ಈ ನಷ್ಟ ತುಂಬುವುದು ಕಷ್ಟ. ಇಂದು ನಮ್ಮನ್ನೂ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಆಗಲಿದ್ದಾರೆ ಭಗವಂತ ಅವರ ಆತ್ಮಕ್ಕೆ ಚೀರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಇವರ ಅಂತ್ಯಕ್ರಿಯೆ ಸ್ವಗ್ರಾಮ ಅರಕೇರಾದಲ್ಲಿ 12ಗಂಟೆಗೆ ನೇರವೇರಿಸಲಾಗುವುದೆಂದು ಕುಟುಂಬ ವರ್ಗದವರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here