ಜಿಲ್ಲಾ ಕುರುಬರ ಸಂಘಕ್ಕೆ ಕೆ.ಕರಿಯಪ್ಪ ರಾಜೀನಾಮೆ.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆ.ಕರಿಯಪ್ಪ ರಾಜೀನಾಮೆ

0
231

ಜಿಲ್ಲಾ ಕುರುಬರ ಸಂಘಕ್ಕೆ ಕೆ.ಕರಿಯಪ್ಪ ರಾಜೀನಾಮೆ.
ಸಿಂಧನೂರು.ಅ.30 – ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆ.ಕರಿಯಪ್ಪ ರಾಜೀನಾಮೆ ನೀಡಿದ್ದು, ಈ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಜಾಲಿಬೆಂಚಿ ಅವರಿಗೆ ಕಳುಹಿಸಿದ್ದಾರೆ.

ಕಳೆದ ಮೂರು ವರ್ಷದಿಂದ ಜಿಲ್ಲಾಧ್ಯಕ್ಷರಾಗಿ ಸಮಾಜದ ಸಂಘಟನೆ, ಏಳಿಗೆ ಇನ್ನಿತರೆ ಕಾರ್ಯಗಳಲ್ಲಿ ತಾವು ಶ್ರಮಪಟ್ಟಿದ್ದು, ಈಗ ವೈಯಕ್ತಿಕ ಕೆಲಸದ ಹಿನ್ನಲೆಯಲ್ಲಿ ಬಿಡುವಿಲ್ಲದಂತಾಗಿ, ಸಮಾಜದ ಸಂಘಟನೆ ಮತ್ತು ವಿಷಯಗಳಿಗೆ ಒತ್ತು ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಮಾಜದ ಏಳಿಗೆಗೆ ಹಿನ್ನಡೆಯಾಗಬಾರದೆಂದು ಮನಗಂಡು ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಅಂಗೀಕರಿಸಬೇಕೆAದು ಕೆ.ಕರಿಯಪ್ಪ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here