ಮಾನ್ವಿ:ಫೆ.29. ಮೇಟಿ ಶಾಲಿನಿ ಮತ್ತು ರಾಮಣ್ಣ ಅವರ ಕುಟುಂಬದಿಂದ ತಂಪಾದ ನೀರಿನ ಅರವಟಿಕೆಗೆ ಎನ್ ಎಸ್ ಬೋಸರಾಜ್ ಅವರು ಉದ್ಘಾಟಿಸಿದರು.
ಪಟ್ಟಣದ ಆಟೋ ನಗರದ ಮುಂಭಾಗದಲ್ಲಿ ತಂಪಾದ ಕುಡಿಯುವ ನೀರಿನ ಅರವಟಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇನ್ನು ಮುಂದೆ ಬೇಸಿಗೆ ಪ್ರಾರಂಭವಾಗುತ್ತಿರುವುದರಿಂದ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಜನರಿಗೆ ಹಾಗೂ ಇಲ್ಲಿರುವ ಕಾರ್ಮಿಕರಿಗೆ ದಣಿವಾರಿಸಿಕೊಂಡು ತಂಪಾದ ನೀರು ಕುಡಿಯಲು ಅರವಟಿಕೆಯನ್ನು ಪ್ರಾರಂಭಿಸಿರುವ ರಾಮಣ್ಣ ಮೇಟಿ ಅವರ ಕುಟುಂಬ ಶ್ಲಾಘನೀಯವಾದದ್ದು ಎಂದು ಹೇಳಿದರು.ಈ ಸಂದರ್ಭದಲ್ಲಿ
ಜಿ ಹಂಪಯ್ಯ ನಾಯಕ, ಮಾಜಿ ಶಾಸಕರು,ದೊಡ್ಡಬಸಪ್ಪಗೌಡ ಭೋಗಾವತಿ, ರಾಜಾ ವಸಂತ ನಾಯಕ, ಹುಸೇನ್ ಬೇಗ್, ಎಸ್ ಎಂ ಪಾಟೀಲ್ ಉದ್ಬಾಳ,ರವಿಚಂದ್ರನ್ ನಾಯಕ, ರಾಮಣ್ಣ ಮೇಟಿ ಹಾಗೂ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು