ಚಪ್ಪಲಿ ಅಂಗಡಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು : ಬಡವನ ಪಾಲಿಗೆ ರೂ.40 ಸಾವಿರ ನಷ್ಟ

0
417

ಸಿಂಧನೂರು: ಫೆ.27- ಸಿಂಧನೂರು ನಗರದ ಮಿನಿವಿಧಾನಸೌಧ ಕಾರ್ಯಾಲಯದ ಮುಂಭಾಗದಲ್ಲಿರುವ ಚಪ್ಪಲಿ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವದರಿಂದ ಸುಟ್ಟುಕರಕಲಾಗಿರುವ ಘಟನೆ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ.

ಸ್ಥಳೀಯ ಪ್ರಶಾಂತನಗರದ ನಿವಾಸಿ ಆನಂದ ಪರಶುರಾಮ ಮುಬ್ರಮ್‍ಕರ್ ಅವರ ಚಪ್ಪಲಿ ಅಂಗಡಿ ಇದಾಗಿದೆ. ಬುಧವಾರ ರಾತ್ರಿ ಕೆಲ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಚರ್ಮ ಕುಟೀರ ಮತ್ತು ಅದರೊಳಗಿದ್ದ ಹೊಸ ಚಪ್ಪಲಿಗಳು ಸಂಪೂರ್ಣ ಸುಟ್ಟುಕರಕಲಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಈ ಕುರಿತು ಶಹರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನವಿ:
ಹುಬ್ಬಳ್ಳಿಯಿಂದ ರೂ.50 ಸಾವಿರ ವೆಚ್ಚದಲ್ಲಿ ಹೊಸ ಚಪ್ಪಲಿ ಸಾಮಗ್ರಿಗಳನ್ನು ಖರೀದಿಸಿ ತರಲಾಗಿತ್ತು. ಅದರಲ್ಲಿ ರೂ.30 ಸಾವಿರ ಮೌಲ್ಯದ ಚಪ್ಪಲಿಗಳನ್ನು ಅಂಗಡಿಯಲ್ಲಿ ಇಡಲಾಗಿತ್ತು. ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರುವದರಿಂದ ಸುಮಾರು ರೂ.40 ಸಾವಿರ ಹಾನಿಯಾಗಿದೆ. ಆದ್ದರಿಂದ ಶಾಸಕರು ಮತ್ತು ತಹಶೀಲ್ದಾರರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಒದಗಿಸಬೇಕೆಂದು ಅಂಗಡಿ ಮಾಲೀಕ ಆನಂದ ಮುಬ್ರಮ್‍ಕರ್ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here