ಫೆ.13ಕ್ಕೆ ರಾಜ್ಯ ಬಂದ್‌ಗೆ ಬೆಂಬಲಿಸಿ : ಸುಪ್ರೀಯ ಕುಮ್ದಾಳ್

0
200

ಮಾನ್ವಿ.ಫೆ-11: ಇದೇ ದಿನಾಂಕ ಫೆ.13 ರಂದು ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ.100 ರಷ್ಟು ಮೀಸಲಾತಿ ನೀಡಬೇಕು ಹಾಗೂ ಡಾ.ಸರೋಜಿನ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ನೀಡಿದ ರಾಜ್ಯ ಬಂದ್‌ಗೆ ಕರ್ನಾಟಕ ವಿಶ್ವನಿರ್ಮಾಣ ಸೇನೆ ಬೆಂಬಲಿಸುವ ಮೂಲಕ ಬಂದ್‌ಗೆ ಜಿಲ್ಲೆ ಮತ್ತು ತಾಲೂಕ ಸಾರ್ವಜನಿಕರು ಬೆಂಬಲಿಸುವಂತೆ ಕರ್ನಾಟಕ ವಿಶ್ವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಸುಪ್ರೀಯಕುಮಾರ ಕುಮ್ದಾಳ್‌ತಿಳಿಸಿದರು.
ಮಂಗಳವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದೇಶಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ.100 ರಷ್ಟು ಮೀಸಲಾತಿ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಯುವಕರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದು, ಹೊರರಾಜ್ಯಗಳಿಗೆ ಉದ್ಯೋಗವನ್ನು ಅರಸಿ ವಲಸೆ ಹೋಗುತ್ತಿದ್ದಾರೆ. ಅನೇಕ ಕುಟುಂಬಗಳು ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಪ್ರತಿವರ್ಷ ರಾಜ್ಯದಲ್ಲಿ ಲಕ್ಷಾಂತರ ಜನರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಿ,ಸಿ,ಡಿ ವರ್ಗದ ಹುದ್ದೆಗಳನ್ನು ಸರ್ಕಾರ ಕನ್ನಡಿಗರಿಗೆ ಮೀಸಲಿಡಬೇಕು. ರಾಜ್ಯದ ಹೈದ್ರಾಬಾದ್ ಕರ್ನಾಟಕ ಭಾಗದ ಸಾರ್ವಜನಿಕರು ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯಮಿಗಳು, ರಾಜಕೀಯ ಮುಖಂಡರು ಬಂದ್‌ಗೆ ಬೆಂಬಲಿಸುವAತೆ ಕೋರಿದರು.
ಈ ಸಂದರ್ಭದಲಿ ಸಿಂಧನೂರು ತಲೂಕಾಧ್ಯಕ್ಷ ದುಗ್ಗಪ್ಪ ಮಲ್ಲಪೂರು, ಜಿಲ್ಲಾ ಉಪಾಧ್ಯಕ್ಷ ಸಾಬಣ್ಣ ನಂದಿಹಾಳ್, ಆಲಂಪಾಷ, ತಿಮ್ಮಪ್ಪ ಚೀಕಲಪರ್ವಿ, ನವೀನ ಕುಮಾರ, ಹನುಮೇಶ ಚೀಕಲಪರ್ವಿ, ಅಮೀರ್ ಪಾಷ ಇದ್ದರು.

LEAVE A REPLY

Please enter your comment!
Please enter your name here