ಸಿಂಧನೂರು:ಜ.29 ಬಸನಗೌಡ ಬಾದರ್ಲಿ ಪೌಂಡೇಷನ್ (ರಿ) ವತಿಯಿಂದ ಸಾಮೂಹಿಕ ವಿವಾಹವನ್ನು ಫೆ.21 ರಂದು ತೀರ್ಮಾನಿಸಲಾಗಿತ್ತು. ಆದರೆ ಅಂದು ಮಹಾಶಿವರಾತ್ರಿ ಹಬ್ಬ ಇರುವುದರಿಂದ ಆ ದಿನದ ಬದಲಾಗಿ ಏಪ್ರಿಲ್-30, 2020 ರಂದು ಸಾಮೂಹಿಕ ವಿವಾಹಗಳು ನಡೆಯಲಿವೆ ಎಂದು ಬಸನಗೌಡ ಬಾದರ್ಲಿ ಪೌಂಡೇಷನ್ನ ಕಾರ್ಯದರ್ಶಿ ವೆಂಕಟೇಶ ನಾಯಕ ರಾಗಲಪರ್ವಿ ತಿಳಿಸಿದ್ದಾರೆ.
ಬುಧವಾರ ಹೇಳಿಕೆ ನೀಡಿರುವ ಅವರು, ಸಿಂಧಂನೂರುನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದ್ದು, ವಿವಾಹದ ಕುರಿತಂತೆ ನೊಂದಣಿ ಮಾಡಿಸಲು ಮಾರ್ಚ್ 02 ಕೊನೆಯ ದಿನಾಂಕವಾಗಿದೆ.
ಈ ಕೆಳಗೆ ಕೊಟ್ಟಿರುವ ಮುಖಂಡರ ನಂಬರ್ ಗಳನ್ನ ಸಂಪರ್ಕಿಸಿ ನೊಂದಾಯಿಸಲು ಮನವಿ ಮಾಡಿಕೊಂ ವೆಂಕಟೇಶ ನಾಯಕ 9449684327, ಖಾಜಾಹುಸೇನ್ ರೌಡಕುಂದಾ 9663798999, ಮಲ್ಲಿಕಾರ್ಜುನ ದಿದ್ದಗಿ 9980034275, ಬಸವರಾಜ ಆಯನೂರು 807320೨2303, ಪಂಪಾಪತಿ ಅಲಬನೂರು 9886170622, 08535 220575.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಾಡಿನ ಹರ-ಗುರು, ಚರ-ಮೂರ್ತಿಗಳು ಕಾರ್ಯ ಕ್ರಮದ ಸಾನಿಧ್ಯವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.