ರಾಯಚೂರು,ಜ.26- ನಗರದ ಯರಮರಸ್ ಕ್ಯಾಂಪ್ ನ ಫೆಡರಲ್ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ವತಿಯಿಂದ 71ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಮುಖ್ಯ ಅಥಿತಿಯಾಗಿ ಆಗಮಿಸಿದ ಮುಜೀಬುದ್ದೀನ್ ಪ್ರಥಮ ದರ್ಜೆ ಗುತ್ತೇದಾರರು ಧ್ವಜಾರೊಹಣ ನೆರವೇರಿಸಿದರು. ಇನ್ನೂರ್ವ ಅಥಿತಿಗಳಾಗಿ ಆಗಮಿಸಿದ ಮಹಮ್ಮದ್ ರಫೀ ಅವರು ಮಹಾತ್ಮ ಗಾಂಧಿ ಹಾಗು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮಹಾತ್ಮರಿಗೆ ಗೌರವಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಹೈ ಫೆರೊಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಸಂಸ್ಥೆಯ ಪ್ರಾಂಶುಪಾಲ ಶ್ರೀ ಸತ್ಯನಾರಾಯಣ ಅವರು ಸಂವಿಧಾನ ಒಳಗೊಂಡ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದ ಪರಿಚ್ಚೇದಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳು ,ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು ಕುಮಾರಿ ಶಫಿಯಾ ಅಂಜುಮ್ ಒಂದನೆಗಳನ್ನ ಅರ್ಪಿಸಿದರು