ಮಾನವಿ,ಜ.26- 71ನೇ ಗಣರಾಜ್ಯೋತ್ಸವ ಪ್ರಯುಕ್ತ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಪಥಸಂಚಲನದಲ್ಲಿ ಸರ್ವೋದಯ ಪಬ್ಲಿಕ್ ಶಾಲೆಯ ಮಕ್ಕಳು ಉತ್ತಮ ಪ್ರತಿಭೆಗಳನ್ನ ತೊರಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಎಶಸ್ವಿಯಾದರು
ಪಥಸಂಚಲನದಲ್ಲಿ ಶಾಲೆಯ ಬಾಲಕಿಯರು ಪ್ರಥಮ ಸ್ಥಾನ ಪಡೆದರೆ ಬಾಲಕರು ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುವುದು ಖುಷಿ ತಂದಿದೆ ಎಂದು ಶಾಲೆಯ ವ್ಯವಸ್ಥಾಪಕರಾದ ಏಚ್ ಆಂಜನಯ್ಯ ತಿಳಿಸಿದರು.
ಉತ್ತಮ ಸ್ಥಾನವನ್ನ ಗಳಿಸಿದ ವಿದ್ಯಾರ್ಥಿಗಳನ್ನ ಶಾಸಕರ ಶ್ರೀ ರಾಜಾ ವೆಂಕಪ್ಪ ನಾಯಕ ಬಹುಮಾನವನ್ನು ವಿತರಿಸುವ ಮೂಲಕ ಪ್ರೊತ್ಸಾಹ ನೀಡಿದರು.
ಈಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಎಲ್ಲಾ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಹೃದಯ ಪೂರ್ವಕ ಅಭಿನಂದನೆಗಳು ಹೇಳುತ್ತದೆ ಎಂದು ತಿಳಿಸಿ ವ್ವಸ್ಥಾಪಕ ಆಂಜಿನಯ್ಯ ಸಂತೊಶವನ್ನ ಹಂಚಿಕೊಂಡರು.