ಮಾನವಿ.ಜ.25- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಮಾನವಿಗೆ ನೂತನ ಅಧ್ಯಕ್ಷರಾಗಿ ಶ್ರೀ ರಾಜ ಸುಭಾಷ್ ಚಂದ್ರ ನಾಯಕ್ ಹಾಗು ಉಪಾಧ್ಯಕ್ಷರಾಗಿ ಕೆ.ವಂಕಣ್ಣ ರವರು ಅವಿರೊಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀ ಅಶೊಕ ಕುಮಾರ ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಮಾನವಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ದಿನಾಂಕ ಜ-25 ರಂದು ಚುನಾವಣೆ ನಿಗದಿಯಾಗಿತ್ತು
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೊಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಘೊಶಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಜಾ ವಸಂತ ನಾಯಕ, ಶ್ರೀ ನೀಲಕಂಟಪ್ಪ, ಶ್ರೀ ಹರಿಹರ ಪಾಟಿಲ್, ಶ್ರೀ ಭೀಮನ ಗೌಡ, ಶ್ರೀ ಅಬ್ದುಲ್ ಮಜೀದ್, ಶ್ರೀಧರ್, ಶ್ರೀ ಶಿವನ ಗೌಡ, ಶ್ರೀಮತಿ ಲಕ್ಷ್ಮಿದೇವಿ, ಕು. ಇಂದುಮತಿ, ಶ್ರೀ ಕರಿಯಪ್ಪ , ಮುಖ್ಯ ಕಾಾರ್ಯನಿರ್ವಾಹಕ ಶ್ರೀ ಶರಣಪ್ಪ ಮತ್ತಿತರರು ಉಪಸ್ಥಿತರಿದ್ದರು