ಹೂವಿನ ರಥದ ಕಳಸ ಇಳಿಸುವುದರ ಮೂಲಕ ಶ್ರೀಮರಿಬಸವರಾಜ ದೇಶಿಕೇಂದ್ರ ಸಾನಿಧ್ಯದಲ್ಲಿ ಕಾರ್ಯಕ್ರಮಗಳು

0
179

ಮಸ್ಕಿ :ಜ.22- ಹೂವಿನ ರಥದ ಕಳಸ ಇಳಿಸುವುದರ ಮೂಲಕ ಶ್ರೀಮರಿಬಸವರಾಜ ದೇಶಿಕೇಂದ್ರ ಸಾನಿಧ್ಯದಲ್ಲಿ ಕಾರ್ಯಕ್ರಮಗಳು

ಸಮೀಪದ ಉಟಕನೂರ ಗ್ರಾಮದ ಮರಿಬಸವಲಿಂಗ ಶಿವಯೋಗಿಯ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ವಿವಿಧ ಧಾರ್ಮಿಕ ಹಾಗೂ ಸಂಪ್ರದಾಯಕವಾಗಿ ಹೂವಿನ ರಥೋತ್ಸವ ಕಳಸ ಇಳಿಸುವುದುರ ಮೂಲಕ ಶ್ರೀಮರಿಬಸವರಾಜ ದೇಶಿಕೇಂದ್ರ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಮಂಗಳವಾರ ಸಂಪನ್ನಗೊಂಡವು. ಸಂಪ್ರಾಯದಂತೆ ಹೂವಿನ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಕಳಸ ಇಳಿಸುವ ಕಾರ್ಯಕ್ರಮ ಜರುಗಿತು. ನಂತರ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ, ಮುಖಂಡರಿಗೆ ಭಕ್ತರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಮಠದಲ್ಲಿ ಭಜನೆ ಪೂಜಾ ಕಾರ್ಯಕ್ರಮಗಳು ಜರುಗಿದವು.

ಸಂದರ್ಭದಲ್ಲಿ ಗೌಡನಭಾವಿ ಕಟ್ಟೆಬಸವೇಶ್ವರ ಮಠದ ನಾಗಪ್ಪತಾತನವರು, ಸಿದ್ದಯಸ್ವಾಮಿ ಉಟಕನೂರು, ಸಿದ್ದಯ್ಯಸ್ವಾಮಿ ದಿನ್ನಿ, ಭಕ್ತರಾದ ರಾಮನಗೌಡ ಗೋನವಾರ, ಹೇಮನಗೌಡ, ವಿರುಪಾಕ್ಷಪ್ಪ ಹರ್ವಾಪುರ, ಚನ್ನಪ್ಪ ನಾಡಗೌಡ, ವೆಂಕನಗೌಡ ದಿದ್ಗಿ, ರಂಗಪ್ಪ ಮಾಸ್ತಾರ, ಜಗದೀಶ ದಿದ್ಗಿ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರಿದ್ದರು.

 

LEAVE A REPLY

Please enter your comment!
Please enter your name here