ಸಿಪಿಐ ವಸಂತಕುಮಾರ ಅವರಿಗೆ ಸನ್ಮಾನ

0
205

ಸಿಂಧನೂರು:
ತಾಲ್ಲೂಕಿನ ಪಿಎಸ್ಐ ಆಗಿ ಕಾರ್ಯನಿರ್ವಹಿಸಿ ಈಚೆಗೆ ಸಿಪಿಐ ಆಗಿ ಮುಂಬಡ್ತಿ ಹೊಂದಿದ ಸಿಪಿಐ ವಸಂತಕುಮಾರ ಅವರ ಹುಟ್ಟು ಹಬ್ಬದ ನಿಮಿತ್ಯ ಸ್ಥಳೀಯ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು. ಪೊಲೀಸರು ತಮ್ಮ ಕಾರ್ಯವನ್ನು ನಿರ್ವಹಿಸಲು ಸಾರ್ವಜನಿಕರ ಸಹಕಾರ ಬಹುಮುಖ್ಯವಾಗಿರುತ್ತದೆ. ಸಿಂಧನೂರಿಗೆ ನನಗೆ ಉತ್ತಮ ಸಂಬಂಧವಿದೆ. ಇಲ್ಲಿನ ಎಲ್ಲಾ ಮುಖಂಡರು ಹಾಗೂ ಸಾರ್ವಜನಿಕರು ಉತ್ತಮ ವ್ಯಕ್ತಿಗಳು. ಅಧಿಕಾರಿಗಳಿಗೆ ಇಲ್ಲಿನ ಜನರು ನೀಡುವ ಸಲಹೆ, ಸಹಕಾರ ಅನನ್ಯವಾಗಿದೆ. ಈಗಾಗಲೇ ತಾಲ್ಲೂಕಿನಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿದ ನನಗೆ ಇಲ್ಲಿನವರು ಬಹಳನೇ ಪ್ರೋತ್ಸಾಹ ನೀಡಿ ಪ್ರಾಮಾಣಿಕವಾಗಿ ಕರ್ತವ್ಯ ಮಾಡಲು ಸಹಕರಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ್, ಯುವ ಕಾಂಗ್ರೆಸ್ ತಾಲ್ಲೂಕಾಧ್ಯಕ್ಷ ಖಾಜಾಹುಸೇನ್ ರೌಡಕುಂದಾ, ಮುಖಂಡರಾದ ನನ್ನುಸಾಬ್ ಮೇಸ್ತ್ರಿ, ಇಲಿಯಾಸ್ ಪಟೇಲ್, ಶಂಕರ ನಂದಿನಿ ಹೋಟೆಲ್, ಶ್ರೀನಿವಾಸ ಮರಾಠ, ಹಬೀಬ್ ಇತರರು ಇದ್ದರು.

LEAVE A REPLY

Please enter your comment!
Please enter your name here