ಮಾನ್ವಿ:ಜ.02 ಡಾ.ಬಿಆರ್ ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ಯುವಕರು ನಡೆಯಬೇಕು ಎಂದು ಅಂಬೇಡ್ಕರ್ ದಲಿತ ಸೇನೆಯ ಪ್ರಧಾನ ಕಾರ್ಯದರ್ಶಿಗಳಾದ ಕೆ. ಶಿವಕುಮಾರ್ ಕೋನಾಪುರ ಪೇಟೆ ಅವರು ಹೇಳಿದರು.
ತಾಲ್ಲೂಕಿನ 3 ಕಿಲೋಮೀಟರ್ ದೂರದಲ್ಲಿರುವ ಮಿಟ್ಟೆ ಕ್ಯಾಂಪಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ನಾಮಫಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ವಿಶ್ವದಾದ್ಯಂತ ಹೆಸರು ಗುರುತಿಸಿಕೊಂಡಿರುವ ವ್ಯಕ್ತಿ ವಿದ್ಯಾರ್ಥಿಗಳು ಯುವಕರು ಅವರ ಹಾದಿಯಲ್ಲಿ ನಡೆಯಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಅಂಬೇಡ್ಕರ್ ದಲಿತ ಸೇನೆ ಜಿಲ್ಲಾಧ್ಯಕ್ಷ ಗುರುರಾಜ ನಾಗಲಾಪುರ,ಆರ್ ಚನ್ನಬಸವ ಬಾಗಲವಾಡ, ನಾಗರೆಡ್ಡಿ, ರಮೇಶ್, ಸುರೇಶ್, ರಂಗಪ್ಪ,ಸಂದೀಪ್ ಕುಮಾರ್ ಹಾಗೂ ಉಪಸ್ಥಿತರಿದ್ದರು