ಪದವಿ ಪೂರ್ವ ಕಾಲೇಜಿನ ಕಟ್ಟಡಕ್ಕೆ ಭೂಮಿ ಮಂಜೂರು ಮಾಡಬೇಕೆಂದು ಪೊತ್ನಾಳ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ.

0
246

ಮಾನವಿ ತಾಲೂಕಿನ ಪೊತ್ನಾಳ ಗ್ರಾಮಕ್ಕೆ 2017-18ನೇ ಸಾಲಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರಿಯಾಗಿದ್ದು ಸದರಿ ಕಾಲೇಜು ಸ್ವಂತ ನೀವೇಶನ ಹಾಗು ಸ್ವಂತ ಕಟ್ಟಡ ಇಲ್ಲದೇ ಇರುವುದರಿಂದ ಕಾಲೇಜಿನ ತರಗತಿಗಳು ತಾತ್ಕಾಲಿಕವಾಗಿ ಸರಕಾರಿ ಪ್ರೌಡ ಶಾಲೆಯಲ್ಲಿ ನಡೆಯುತ್ತಿವೆ ಈಗಾಗಲೆ 2018-19 ನೇ ಸಾಲಿನಲ್ಲಿ ಕಾಲೇಜಿನ ಕಟ್ಟಡಕ್ಕಾಗಿ ಕೆಕೆಡಿಬಿ ವತಿಯಿಂದ 13500000 (ಒಂದು ಕೊಟಿ ಮೂವತ್ತೈದು ಲಕ್ಷ)ಹಣ ಮಂಜೂರಾಗಿರುತ್ತದೆ.

ಸದರಿ ಕಾಲೇಜಿನ ಕಟ್ಟಡಕ್ಕೆ ಗ್ರಾಮದ ಸರಕಾರಿ ಪ್ರೌಡ ಶಾಲೆಗೆ ಹೊಂದಿಕೊಂಡಿರುವ ಖಾಲಿ ನಿವೇಶನ ಸರ್ವೇ ನಂ 182 ರಲ್ಲಿ 2 ಎಕರೆ 7 ಗುಂಟೆ ಸರಕಾರಿ ಜಮೀನು ಇದೆ ಕಾರಣ ಆ ಜಮೀನು ಸದರಿ ಕಾಲೇಜಿಗೆ ನೀಡಿ ಕಾಲೇಜಿನ ಕಟ್ಟಡ ನಿರ್ಮಿಸಲು ಅನುಕೂಲ ಮಾಡಿಕೊಡ ಬೇಕೆಂದು ಗ್ರಾಮದ ಮುಖಂಡರು ಮತ್ತು ಎಲ್ಲಾ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೊಡುವುದರ ಮೂಲಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ M ಮಲ್ಲಿಕಾರ್ಜುನ, ಎಚ್ ಶರ್ಫುದ್ದೀನ್,ಕೆ ಎಸ್ ಕುಮಾರ ಸ್ವಾಮಿ,ಎಲ್ ಚಕ್ರವರ್ತಿ,ಚನ್ನ ಬಸಯ್ಯ ಸ್ವಾಮಿ,ಶಿವಪ್ಪ,ಡಾ.ಗುರು ಶರ್ಮಾ,ಬಸವರಾಜ ಗುಜ್ಜಲ್, R. ಬಸವರಾಜ ಶಟ್ಟಿ, ಎಸ್ ಬಸವರಾಜ್, ಚನ್ನಪ್ಪ,ವಿರುಪಾಕ್ಷಿ ಗೌಡ. ಮತ್ತು ಗ್ರಾಮದ ಇತರೇ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here