ಪಟ್ನಾ(ಡಿ.16): ಅಯೋಧ್ಯೆಯಲ್ಲಿ ಇನ್ನು ನಾಲ್ಕು ತಿಂಗಳೊಳಗೆ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ಶಾ ಭರವಸೆ ಕೊಟ್ಟಿದ್ದಾರೆ
ಸುಪ್ರೀಂಕೋರ್ಟ್ ಈಗಾಗಲೇ ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತೀರ್ಪು ಕೊಟ್ಟಿದೆ. ಅಲ್ಲದೇ ಮಂದಿರದ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸಬೇಕು ಮತ್ತು ಸರಕಾರ ತನ್ನ ಹಂತದಲ್ಲಿ ಸುನ್ನೀ ವಕ್ಫ್ ಬೊರ್ಡ್ ಗೆ ಮಸೀದಿ ನಿರ್ಮಿಸಿಕೊಳ್ಳಲು 5 ಎಕರೆ ಭೂಮಿ ಕೊಡಬೇಕು ಎಂದು ಆದೇಶಿಸಿದೆ
ತೀರ್ಪು ಪ್ರಕಟವಾದ ಎರಡು ದಿನದ ನಂತರ ಗೃಹ ಸಚಿವರು ಟ್ರಸ್ಟ್ ರಚನೆಗೆ ಮುಂದಾಗಿದ್ದು, ಮಂದಿರ ನಿರ್ಮಾಣ ಕುರಿತು ನಿರ್ವಹಣೆ ನಡೆಸಿದ್ದರು. ಈಗಾಗಲೇ ಮಂದಿರ ನಿರ್ಮಾಣದ ಕುರಿತು ನೀಲಿ ನಕ್ಷೆ ಸಹ ಸಿದ್ಧವಾಗಿದೆ.
ಮುಗಿಲು ಮುಟ್ಟವ ದೇಗುಲದ ನಿರ್ಮಾಣದ ಕಾಮದಾರಿ ನಾಲಕ್ಕು ತಿಂಗಳ ನಂತರ ಪ್ರಾರಂಭ ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.